ತಾಳಿಕೋಟೆ:ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಂಪೂರ ಪಿ.ಟಿ ಗ್ರಾಮದಲ್ಲಿ ರೂ.1 ಕೋಟಿ ವೆಚ್ಚದ ಬಹುಪಯೋಗಿ ಭವನ ನಿರ್ಮಾಣ ಕಾಮಗಾರಿಗೆ ದಸ್ತಗೀರಪಟೇಲ ಬಿರಾದಾರ ಅವರು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಮಹಮ್ಮದ್ ಅಲ್ತಾಫ ಲಕ್ಕುಂಡಿ, ಮುಖಂಡರಾದ ಅಹ್ಮದ್ ಹುಸೇನ ಮೋಮಿನ, ಗ್ರಾ.ಪಂ.ಸದಸ್ಯ ದ್ಯಾವಪ್ಪ ಹರಿಜನ, ಬಾಬು ಉಣ್ಣಿಭಾವಿ, ಭಾಷಾಸಾಬ ಸಿರಸಗಿ, ಲಾಳೇಸಾಬ ಬನ್ನೆಟ್ಟಿ, ಮಹಿಬೂಬಸಾಬ ಸಿರಸಗಿ, ಇಮಾಮಪಟೇಲ ಬಿರಾದಾರ, ಸಿದ್ದಯ್ಯ ನಂದಿಮಠ, ಖಾಸಿಂಸಾಬ್ ನಾಯ್ಕೋಡಿ, ಡಾ.ಎಂ.ಎಂ.ಗುಡ್ನಾಳ,ರಾಮರಾವ್ ದೇಶಮುಖ, ಗಫೂರಸಾಬ ಇಮಾರತವಾಲೆ, ಕಿರಣ ಕುಮಾರ ದೇಸಾಯಿ, ದಸ್ತಗೀರ ಪಟೇಲ ಬಿರಾದಾರ, ದ್ಯಾವಪ್ಪ ಹರಿಜನ್, ಎಂ.ಎಂ.ಲಷ್ಕರಿ, ಸಲೀಂ ನಾಯ್ಕೋಡಿ, ಎಚ್ ಡಿ ನದಾಫ್, ಡಾ.ಕೆ.ಎಂ.ಗುಡ್ನಾಳ, ನಬಿಸಾಬ ಸಿರಸಗಿ ಹಾಗೂ ರಾಮಪುರ, ಕಲಕೇರಿ ಹುಣಶ್ಯಾಳ ಗ್ರಾಮದ ಪ್ರಮುಖರು ಇದ್ದರು.
