ವಿಜಯ ಸಿಂಧೂರ, ಲಕ್ಷ್ಮೇಶ್ವರ
ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರೈತರಲ್ಲಿ ಹರ್ಷವನ್ನು ತಂದಿದೆ ಇದರಿಂದ ಮುಂಗಾರು ಬಿತ್ತನೆಯ ಚಟುವಟಿಕೆಯ ಕಾರ್ಯ ಚುರುಕುಗೊಂಡಿವೆ ಇಂಥ ಸಮಯದಲ್ಲಿ ರೈತರಿಗೆ ಪೆಟ್ರೋಲ್ ಡೀಸೆಲ್ ಅವಶ್ಯ ಆದರೆ ಇಂಥ ಸಮಯದಲ್ಲಿ ಡೀಸೆಲ್ ಅಬಾವ ತಲೆದುರಿದ್ದು ರೈತರು ಡೀಸೆಲ್ ಪೆಟ್ರೋಲಿಗೆ ಪರದಾಡುವಂತಾಗಿದೆ

ಪಟ್ಟಣದ ಮಂಜರಾಪುರ ರಸ್ತೆಯ ಬಂಕಲ್ಲಿ ಶನಿವಾರ ರಾತ್ರಿ 10:30 ರ ಸುಮಾರು ಪಟ್ಟಣದ ಉಳಿದ ಎಲ್ಲಾ ಬಂಕಗಳಲ್ಲಿ ಡೀಸೆಲ್ ಇಲ್ಲಾ ಎಂದು ಕೇಳಿ ಬಂದ ಹಿನ್ನೆಲೆ ರಾತ್ರಿ ಉಳುಮೆ ಮಾಡಲು ಜಮೀನಿಗೆ ತೆರಳುವ ಅನ್ನದಾತರು ಡೀಸೆಲ್ ಪಡೆದುಕೊಳ್ಳಲು ಬಂಕನ ಮುಂದೆ ಸಾಲುಗಟ್ಟಿ ನಿಂತು ಡೀಸೆಲ್ ಪಡೆಯಲು ಪರದಾಡುತ್ತಿರುವುದು ಅದರಂತೆ ಇಂದು ಭಾನುವಾರ ಬೆಳಿಗ್ಗೆ ಮಾನ್ವಿಯರ ಪೆಟ್ರೋಲ್ ಬಂಕಗೆ ಡೀಸೆಲ್ ಬಂದ ಕಾರಣ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲು ಮುಗಿಬಿದ್ದರು

ಇದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಜನರನ್ನು ನಿಯಂತ್ರಿಸಿದರು ಹಾಗೂ ಎಲ್ಲರೂ ಸರಣಿ ಸಾಲಿನಲ್ಲಿ ನಿಂತು ಪೆಟ್ರೋಲ್ ಡೀಸೆಲ್ ಖರೀದಿಸಿ ಎಲ್ಲರಿಗೂ ಸಿಗುತ್ತದೆ ಎಂದು ಹೇಳಿ ಸಮಾಧಾನಪಡಿಸುತ್ತಿದ್ದರು ಕೃಷಿ ಚಟುವಟಿಕೆಗಳು ಚುರುಕುಗೊಂಡ ಇಂಥ ಸಮಯದಲ್ಲಿ ಸಮರ್ಪಕವಾಗಿ ಪೆಟ್ರೋಲ್ ಡೀಸೆಲ್ ಪೂರೈಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ
